Slide
Slide
Slide
previous arrow
next arrow

“ಜೈ ಹನುಮಾನ್ ಕೀ ಜೈ, ಐಸಾ‌ ಬಜಿ ಐಸಾ”

300x250 AD

ಹೊಂಡದಲ್ಲಿ ಹೂತ ಬಸ್ ಹೊರತರಲು ಹರಸಾಹಸ

ಜೋಯಿಡಾ : ಅರೇ ಇದ್ಯಾಕೆ ಅಂದ್ಕೊಂಡ್ರಾ, ಜೋಯಿಡಾ ತಾಲೂಕಿನ ಕುಂಬಾರವಾಡ – ಅಣಶಿ ಮಧ್ಯದಲ್ಲಿ ಬರುವ ಅಂಬಾಳಿಯ ಹತ್ತಿರ ಬೆಳಗಾವಿಯಿಂದ ಕಾರವಾರಕ್ಕೆ ಹೋಗುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸಾರಿಗೆ ಬಸ್ಸೊಂದು ನಡು ರಸ್ತೆಯಲ್ಲಿ ಹೊಂಡದಲ್ಲಿ ಹೂತು, ಅದನ್ನು ಹೊರತರಲು ಬಹಳಷ್ಟು ಹೊತ್ತು ಒದ್ದಾಡಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.

ಎಷ್ಟೇ ಪ್ರಯತ್ನಿಸಿದರೂ ಬಸ್ ಮುಂದಕ್ಕೆ ಹೋಗಲಾಗದೆ, ಕೊನೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಹಾಗೂ ಇನ್ನಿತರ ವಾಹನಗಳ ಪ್ರಯಾಣಿಕರು ಸೇರಿ ಬಸ್ಸನ್ನು ಐಸಾ ಬಜಿ ಐಸಾ ಎಂದು ತಳ್ಳಿದ್ದರೂ ಸಹ ಬಸ್ ಮಾತ್ರ ನಿಮಗಿಂತ ನಾನೆ ಗಟ್ಟಿ ಎಂದು ಒಂದಿಂಚು ಕದಡೆದೆ ನಿಂತು ತನ್ನ ಎದೆಗಾರಿಕೆಯನ್ನು ಮೆರೆದಿದೆ. ನಾನು ಬಿಟ್ರೆ ತಾನೇ ನೀನು ಮುಂದೆ ಹೋಗದಲ್ವಾ ಎಂದು ರಸ್ತೆಯ ಗುಂಡಿಯೂ ಬಸ್ಸಿನ ಜೊತೆ ಹಟ ಹಿಡಿದಂತೆ ಭಾಸವಾಗತೊಡಗಿದೆ.

300x250 AD

ಈ ರಸ್ತೆಯಲ್ಲಿ ಸಾಕಷ್ಟು ಕಡೆಗಳಲ್ಲಿ ಹೊಂಡ ಗುಂಡಿಗಳಿದ್ದು ತಾತ್ಕಾಲಿಕವಾಗಿಯಾದರೂ ಹೊಂಡ ಗುಂಡಿಗಳನ್ನು ಮುಚ್ಚುವ ವ್ಯವಸ್ಥೆಯನ್ನು ಬಹಳ ತುರ್ತು ಮಾಡಬೇಕಾಗಿದೆ.

Share This
300x250 AD
300x250 AD
300x250 AD
Back to top